ಹಸಿರು ಹಾದಿಯ ಕಥನ ಪುಸ್ತಕ ಬಿಡುಗಡೆ

ಶಿವಮೊಗ್ಗ : ರೈತ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಹೋರಾಟಗಾರ ಅಂದ್ರೆ ಅದು ಹೆಚ್.ಆರ್.ಬಸವರಾಜಪ್ಪ. ಇದೀಗ ಅವರ ಐದು ದಶಕಗಳ ರೈತ ಹೋರಾಟದ ಕುರಿತಾದ ಪುಸ್ತಕ ಮತ್ತು ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ.

ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ಹಾದಿಯ ಕಥನ ಎಂಬ ಹೆಸರಿನ ಪುಸ್ತಕ ಮತ್ತು ಸಾಕ್ಷ್ಯಚಿತ್ರ ವನ್ನು ಸಿರಿಗೇರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಬಿಡುಗಡೆ ಮಾಡಿದರು. ಸಾಕ್ಷ್ಯ ಚಿತ್ರದಲ್ಲಿ ರೈತ ಹೋರಾಟಗಾರ ಹೆಚ್. ಆರ್. ಬಸವರಾಜಪ್ಪ ಅವರ ಜೀವನನ್ನು ಅನಾವರಣ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ರೈತ ಹೋರಾಟಗಾರರಾದ ಕಡಿದಾಳು ಶಾಮಣ್ಣ ಹಾಗೂ  ಡಾ.ಬಿ.ಎಂ.ಚಿಕ್ಕಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.