ಶಿವಮೊಗ್ಗ : ಸೋಮಿನಕೊಪ್ಪ ರಸ್ತೆಯ ದೇವರಾಜ್ ಅರಸ್ ಬಡಾವಣೆಯಲ್ಲಿ ನಿರ್ಮಿಸಿರುವ ಆರ್ಯ ವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸುಮಾರು 2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಲ್ಯಾಣ ಮಂಟಪವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಂದ್ಹಾಗೆ ಈ ಮಂಟಪದಲ್ಲಿ 20 ಕೊಠಡಿಗಳಿದ್ದು ಸಭೆಗಳನ್ನು ನಡೆಸಲು ಕೂಡ ಅನುಕೂಲವಾಗುವಂತೆ ಭವನದ ನಿರ್ಮಾಣ ಮಾಡಲಾಗಿದೆ. ಜೊತೆಗೆ ಸಂಪೂರ್ಣ ಭವನಕ್ಕೆ ಎಸಿ ವ್ಯವಸ್ಥೆ ಕಲ್ಪಿಸಲಾಗಿದೆ. 400 ಜನರು ಭವನದಲ್ಲಿ ಕೂರಲು ಸ್ಥಳಾವಕಾಶವಿದ್ದು, 1000ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಕೂರುವಂತಹ ಊಟದ ಹಾಲ್ ಇದೆ.
.jpg)
.jpg)
.jpg)
.jpg)
.jpg)
.jpg)
