ಶಿವಮೊಗ್ಗ : ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ನ 7ನೇ ವಾರ್ಷಿಕ ಸಮ್ಮೇಳನ ಏಪ್ರಿಲ್ 8 ಹಾಗೂ 9ರಂದು ನಡೆಯಲಿದೆ. ಹಾಗೆಯೇ, ಏಪ್ರಿಲ್ 10ರಂದು ಭಗವಾನ್ ಶ್ರೀ ರಾಮಕೃಷ್ಣ ಭಾವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರ್ಷಿಕ ಸಮ್ಮೇಳನದಲ್ಲಿ ದೇಶದೆಲ್ಲೆಡೆಯಿಂದ ಸುಮಾರು 75 ಯತಿಗಳು, ಮಾತಾಜಿಗಳು, ಚಿಂತಕರು ಆಗಮಿಸುತ್ತಿದ್ದಾರೆ ಹಾಗೂ ಕರ್ನಾಟಕದ ಹಲವು ಮಠಾಧೀಶರು ಕೂಡ ಭಾಗವಹಿಸಲಿದ್ದಾರೆ. ಸಮ್ಮೇಳನವು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
.jpg)
.jpg)
.jpg)
.jpg)
.jpg)
.jpg)
