ಶಿವಮೊಗ್ಗ : ಕುವೆಂಪು ರಂಗಮಂದಿರದಲ್ಲಿ ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮಕ್ಕೆ ಕುವೆಂಪು ವಿವಿ ಕುಲಸಚಿವೆ ಅನುರಾಧ ದೀಪಬೆಳಗವುದರ ಮೂಲಕ ಚಾಲನೆ ನೀಡದರು
. ಈ ವೇಳೆ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ಈ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದ್ದೆವು. ಕೋವಿಡ್ ಬಂದ ನಂತರ ಜಯಂತಿ ಆಚರಣೆಗೆ ಅನುದಾನ ಕಡಿಮೆಯಾದ ಹಿನ್ನೆಲೆ ನಾವು ಸರಳವಾಗಿ ಆಚರಿಸುತ್ತಿದ್ದೇವೆ. ಕೋವಿಡ್ ಕಡಿಮೆಯಾಗುತ್ತಿದೆ. ಆದ್ದರಿಂದ ಇಂತಹ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಸಾಕಷ್ಟು ಜನರೂ ಕೂಡ ಭಾಗಿಯಾಗಿ ಇಂಥಹ ಮಹಾನುಭಾವರ ತತ್ವಗಳನ್ನು ತಿಳಿಯಬೇಕು ಎಂದರು.
.jpg)
.jpg)
.jpg)
.jpg)
.jpg)
.jpg)
