ಅಪಘಾತವಾದ ಕಾರು ಗಮನಿಸಿ ರಕ್ಷಣೆಗೆ ಮುಂದಾದ ಗೃಹಸಚಿವರು

ಹೈಲೆಟ್ಸ್ : 

ಹಾದಿಗಲ್ಲು ಬಳಿ ಕರೆಂಟ್ ಕಂಬಕ್ಕೆ ಗುದ್ದಿದ ಕಾರು
ಅಪಘಾತವಾದ ಕಾರು ಗಮನಿಸಿ ರಕ್ಷಣೆಗೆ ಮುಂದಾದ ಗೃಹಸಚಿವರು
ಕಾರಿನಲ್ಲಿದ್ದವರ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ವ್ಯವಸ್ಥೆ

ಹಾದಿಗಲ್ಲು : ಭಾನುವಾರ ರಾತ್ರಿ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಬಳಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಈ ಘಟನೆಗೆ ಖುದ್ದು ಗೃಹಸಚಿವ ಆರಗ ಜ್ಞಾನೇಂದ್ರರವರು ಸಾಕ್ಷಿಯಾದರು. ಹುಬ್ಬಳ್ಳಿಯಿಂದ ಗೃಹಸಚಿವರು ಬರುತ್ತಿದ್ದಾಗ ಹಾದಿಗಲ್ಲು ಬಳಿ ಈ ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಕರೆಂಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿತ್ತು. ಅದೇ ಮಾರ್ಗದಲ್ಲಿ ಬಂದ ಗೃಹಸಚಿವರು ಸನ್ನಿವೇಶ ನೋಡತ್ತಲೇ ಗಾಡಿಯಿಂದ ಇಳಿದು ಸ್ಥಳಕ್ಕೆ ಬಂದರು. ಅಪಘಾತಕ್ಕೀಡಾದ ಕಾರಿನ ಮೇಲೆ ಕರೆಂಟ್ ವೈರ್ ಬಿದ್ದಿರುವುದನ್ನ ಗಮನಿಸಿ, ಮೊದಲು ಕಾರಿನಲ್ಲಿದ್ದವರ ರಕ್ಷಣೆ ಮಾಡಲು, ತಮ್ಮ ಸಿಬ್ಬಂದಿಗೆ ಸೂಚಿಸಿದರು.

ನಂತರ ಕಾರಿನಲ್ಲಿದ್ದವರ ಆರೋಗ್ಯ ವಿಚಾರಿಸಿದ ಸಚಿವರು ಅವರ ಚಿಕಿತ್ಸೆಗೂ ವ್ಯವಸ್ಥೆ ಮಾಡಿದ್ರು. ಅಷ್ಟೊತ್ತಿಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು.