ಶಿವಮೊಗ್ಗ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯ ವಿಚೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಜ್ಞಾನದೀಪ ಪ್ರೌಢಶಾಲೆಯ ಅರ್ನವ್, ಸರ್ವೋದಯ ಪ್ರೌಢಶಾಲೆಯ ಯುವ ವಿಜ್ಞಾನಿ ಪವಿತ್ರ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು ವಿವಿಧ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 5ಸಾವಿರ, ದ್ವಿತೀಯ 3ಸಾವಿರ ಜೊತೆಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಲಾಗಿದೆ.
ಈ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪರಿಸರ ನಾಗರಾಜ್ ವಹಿಸಿಕೊಂಡಿದ್ದರು. ಡಯಟ್ ಸಂಸ್ಥೆಯ ಪ್ರಾಚಾರ್ಯ ಬಿ.ಆರ್.ಬಸವರಾಜಪ್ಪ, ಡಾ. ಎಚ್.ಬಿ.ಸುರೇಶ್, ಜಗದೀಶ್, ಫ್ರಾನ್ಸೀಸ್ ಬೆಂಜಮಿನ್, ಗಾಯತ್ರಿ ಪಟೇಲ್, ಡಾ.ರಶ್ಮಿ, ಲೋಕೇಶ್ವರಪ್ಪ, ಜಿ.ವಿಜಯ್ಕುಮಾರ್ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.